ಭಾರತದಲ್ಲಿ ಚುನಾವಣೆಗಳು ನ್ಯಾಯೋಚಿತವಾಗಿವೆಯೇ?
·
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗಿರಲಿಲ್ಲ ಎನ್ನುವ ವಿಚಾರವನ್ನು ಮುಖ್ಯವಾಗಿ ಮುಂದಿಟ್ಟುಕೊಂಡು ಕೆಲದಿನಗಳ ಹಿಂದೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಟಿ ಮತ್ತು ನಂತರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಡೆಸಿದ ಪತ್ರಿಕಾ ಗೋಷ್ಟಿ ಗಮನಿಸಲೇಬೇಕಾದ ವಿದ್ಯಮಾನಗಳು.