📹 28 April 2026 Vid: Ruchir Sharma Interview: Oil Shock, Debt, AI & The Future of Global Economy (Express Adda)
ಹಲವು ವಿಚಾರಗಳನ್ನು ಕುರಿತ ಈ ವ್ಯಾಪಕ ಸಂದರ್ಶನದಲ್ಲಿ ರುಚಿರ್ ಶರ್ಮಾ ಅವರು ಜಾಗತಿಕ ಹೂಡಿಕೆ ಸಮುದಾಯವು ಪ್ರಸ್ತುತ ಸಮಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕುರಿತು ವಿಪರೀತವಾದ ಆಸಕ್ತಿ ಹೊಂದಿದೆ ಎಂದು ವಾದಿಸುತ್ತಾರೆ. ವಿದೇಶಿ ಹೂಡಿಕೆದಾರರು ಭಾರತವನ್ನು AI ರೇಸ್ನಲ್ಲಿ “ಸೋತವರು” ಎಂದು ನೋಡುತ್ತಾರೆ ಎಂದು ಅವರು ಗಮನಿಸುತ್ತಾರೆ. ಏಕೆಂದರೆ ಭಾರತವು AI ನಲ್ಲಿ ಅಗತ್ಯ ಮೂಲಸೌಕರ್ಯವನ್ನು ಹೊಂದಿಲ್ಲ ಮತ್ತು ಅದರ GDP ಯ 0.6% ಯಷ್ಟನ್ನು ಮಾತ್ರ R&D ಗಾಗಿ ಖರ್ಚು ಮಾಡುತ್ತದೆ. ಇದು ಭಾರತದ ಬಗೆ ಗೆ “ಉದಾಸೀನತೆ”ಗೆ ಕಾರಣವಾಗಿದೆ, ಬದಲಿಗೆ US ಟೆಕ್ ಕಂಪನಿಗಳಿಗೆ ಬಂಡವಾಳದ ಪ್ರವಾಹವೇ ಹರಿಯುತ್ತಿದೆ. ಶರ್ಮಾ ಅವರು ಪಶ್ಚಿಮ ಬಂಗಾಳದ ಚುನಾವಣೆಗಳನ್ನು ಚರ್ಚಿಸುತ್ತಾರೆ. ಅಭಿವೃದ್ಧಿಕೇಂದ್ರಿತ ಆಡಳಿತಕ್ಕಿಂತ ಕಲ್ಯಾಣಕಾರ್ಯಕ್ರಮಗಳು ಪ್ರಾಥಮಿಕ ರಾಜಕೀಯ ಚಾಲಕ ಶಕ್ತಿಯಾಗಿರುವ ಬದಲಾವಣೆಯನ್ನು ಗುರುತಿಸುತ್ತಾರೆ. ಮತ್ತು ಕಷ್ಟಕರವಾದ ನಿಯಂತ್ರಣ ಪರಿಸರದಿಂದಾಗಿ ಭಾರತದಲ್ಲಿ ಖಾಸಗಿ ಬಂಡವಾಳ ವೆಚ್ಚವು ಕಡಿಮೆಯಾಗಿದೆ ಎಂದು ಗಮನಿಸುತ್ತಾರೆ.
📹 29 April 2026 Vid: From Hormuz to Your Wallet: US–Iran Deadlock and India’s Risk Explained (DeKoder)
ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವಿನ ಸಂಧಾನದಲ್ಲಿ ಉಂಟಾಗಿರುವ ಅನಿಶ್ಚಿತತೆ, ಅದರಲ್ಲೂ ವಿಶೇಷವಾಗಿ ಹೊರ್ಮುಜ್ ಜಲಸಂಧಿ ಮತ್ತು ಇರಾನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಸಂಬಂಧಿಸಿದಂತೆ ಮೂಡದ ಒಮ್ಮತದ ಬಗೆಗೆ ಚರ್ಚಿಸಲಾಗಿದೆ. ದೀರ್ಘಾವಧಿಯ “ಯುದ್ಧವೂ ಇರದ ಶಾಂತಿಯೂ ಇರದ” ಸನ್ನಿವೇಶವು ತೈಲ ಬೆಲೆ ಆಘಾತಗಳು ಮತ್ತು ಆಹಾರ ಹಣದುಬ್ಬರ ಸೇರಿದಂತೆ ಜಾಗತಿಕ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ. ಭಾರತಕ್ಕೆ ಈ ಬಿಕ್ಕಟ್ಟು ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. GDP ಬೆಳವಣಿಗೆಯಲ್ಲಿ 1% ನಷ್ಟು ಖೋತಾ ಆಗುವ ಬಗ್ಗೆ ಮತ್ತು ಅಡುಗೆ ಅನಿಲ ಮತ್ತು ಜೆಟ್ ಇಂಧನದಲ್ಲಿ ದೇಶೀಯ ಕೊರತೆ ಉಂಟಾಗುವ ವಿಚಾರವನ್ನು ಚರ್ಚೆಯು ಒಳಗೊಂಡಿದೆ. ಒಪೆಕ್ನಿಂದ ಯುಎಇ ಹೊರಹೋಗುವುದನ್ನು ಹೈಲೈಟ್ ಮಾಡಲಾಗಿದೆ. ಮತ್ತು ಇದು ಜಾಗತಿಕ ತೈಲ ಮಾರುಕಟ್ಟೆಗಳನ್ನು ಮತ್ತಷ್ಟು ಅಸ್ಥಿರಗೊಳಿಸಬಹುದು ಮತ್ತು ಕಾರ್ಟೆಲ್ನ ಹತೋಟಿಯನ್ನು ದುರ್ಬಲಗೊಳಿಸಬಹುದು.
📹 30 April 2026 Vid: Stories of Musical Life in Nizami Hyderabad c.1780-1830 | Katherine Schofield (Manthan India)
ನಿಜಾಮರ ಕಾಲದ ಹೈದರಾಬಾದ್ ನಲ್ಲಿನ ಸಂಗೀತ ಮತ್ತು ಸಾಂಸ್ಕೃತಿಕ ಜೀವನದ ಐತಿಹಾಸಿಕ ವಿಶ್ಲೇಷಣೆ ಇಲ್ಲಿದೆ. ಕವಿ ಮತ್ತು ಆಸ್ಥಾನ ಪ್ರದರ್ಶಕಿ ಮಹ್ಲಕಾ ಬಾಯಿ ‘ ಚಂದಾ’ ಮತ್ತು ಅವರ ಶಿಕ್ಷಕ, ಖುಶಾಲ್ ಖಾನ್ ‘ಅನುಪ್’ ಅನ್ನು ಕೇಂದ್ರೀಕರಿಸಿದೆ. ಕ್ಯಾಥರೀನ್ ಸ್ಕೋಫೀಲ್ಡ್ ಅವರು ಅನುಪ್ ಅವರ ಕುರಿತು ಅವರು ಅತ್ಯಾಧುನಿಕ ಪರ್ಷಿಯನ್ ಮತ್ತು ಬ್ರಜ ಭಾಷಾ ಗ್ರಂಥಗಳ ಮೂಲಕ ಉನ್ನತ ಶಿಕ್ಷಣ ಪಡೆದ ವಿದ್ವಾಂಸರು ಎಂದು ವರ್ಣಿಸುತ್ತಾರೆ. ಆನುವಂಶಿಕ ಮಾಸ್ಟರ್ ಸಂಗೀತಗಾರರು (ಉಸ್ತಾದ್ ಗಳು) ಅನಕ್ಷರಸ್ಥರು ಎಂಬ ಸ್ಟೀರಿಯೊಟೈಪ್ ಅನ್ನು ಸವಾಲು ಮಾಡುತ್ತಾರೆ. ಸಂಗೀತಗಾರರು ತಮ್ಮ ಪ್ರತಿಷ್ಠಿತ ವಂಶಾವಳಿಗಳನ್ನು ದೃಢೀಕರಿಸಲು ತಮ್ಮ ಬರಹಗಳನ್ನು ಬಳಸುವಾಗ ಸಂಗೀತವು ಮೊಘಲರು, ಮರಾಠರು, ಬ್ರಿಟಿಷರು, ಶಿಯಾಗಳು ಮತ್ತು ಸುನ್ನಿಗಳು- ಹೀಗೆ ವಿವಿಧ ಸಮುದಾಯಗಳ ನಡುವಿನ ಪರಸ್ಪರ ಅಂತರ ಸಂಪರ್ಕ ಕ್ರಿಯೆಗೆ ಹೇಗೆ ಒಂದು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ವ್ಯಕ್ತವಾಗುವುದನ್ನು ಸ್ಕೋಫೀಲ್ಡ್ ಅವರು ಗಮನಿಸುತ್ತಾರೆ.
📢29 Apr 2026 Pod: The Mental Health Crisis Starts in the Gut (The Dr Hyman Show)
ಕರುಳಿನ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮ ಇವೆರಡರ ನಡುವೆ ಕಾಣಬರುತ್ತಿರುವ ವೈಜ್ಞಾನಿಕ ಲಿಂಕ್ ಅನ್ನು ಈ ಪಾಡ್ ಕಾಸ್ಟ್ನಲ್ಲಿ ಚರ್ಚಿಸಲಾಗಿದೆ. ಡಾ. ವಿಲಿಯಂ ಲಿ ಮತ್ತು ಡಾ. ಮಾರ್ಕ್ ಹೈಮನ್ ಅವರು ಆತಂಕ ಮತ್ತು “ಮೆಂಟಲ್ ಫಾಗ್ “ ನಂತಹ ಪರಿಸ್ಥಿತಿಗಳು ವಾಸ್ತವವಾಗಿ ಅನಾರೋಗ್ಯಕರ ಕರುಳಿನ ಸೂಕ್ಷ್ಮಜೀವಿ ಅಥವಾ ಉರಿಯೂತದಿಂದ ಉಂಟಾಗುವ ಸಂಕೇತಗಳಾಗಿರಬಹುದು ಎಂದು ವಾದಿಸುತ್ತಾರೆ. ಮಾನಸಿಕ ಆರೋಗ್ಯದ ಬಿಕ್ಕಟ್ಟುಗಳಿಗೆ ಚಿಕಿತ್ಸೆ ನೀಡುವ ಸಾಂಪ್ರದಾಯಿಕ ವಿಧಾನದಲ್ಲಿ ಕರುಳಿನ ಆರೋಗ್ಯವನ್ನು ಸಹ ಗಮನಿಸಬೇಕಾಗಿರುವುದರ ಪ್ರಾಮುಖ್ಯತೆ ಮತ್ತು ಸಾಮಾನ್ಯವಾಗಿ ಅದು ನಿರ್ಲಕ್ಷಿಸಲ್ಪಡುವುದು ಇವನ್ನು ಗಮನಿಸುತ್ತಾರೆ.
📢 29 Apr 2026 Pod: India’s Youth Boom Meets a Jobs Bust (Grand Tamasha)
ಈ ಪಾಡ್ಕ್ಯಾಸ್ಟ್ ಸಂಚಿಕೆಯು “ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026” ವರದಿಯನ್ನು ಚರ್ಚಿಸುತ್ತದೆ, ಇದು ಗಮನಾರ್ಹ ವಿರೋಧಾಭಾಸವನ್ನು ಎತ್ತಿ ತೋರಿಸುತ್ತದೆ: ಭಾರತವು ದೊಡ್ಡ ಪ್ರಮಾಣದಲ್ಲಿ ಯುವ ಉದ್ಯೋಗಿಗಳನ್ನು ಹೊಂದಿರುವಾಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ವಿಸ್ತರಿಸುತ್ತಿರುವಾಗ, ಪದವೀಧರ ನಿರುದ್ಯೋಗವು ಅಧಿಕವಾಗಿದೆ. ಚರ್ಚೆಯಲ್ಲಿ ರೋಸಾ ಅಬ್ರಹಾಂ ಅವರು, ಭಾರತವು ತನ್ನ Demographic Dividend ( ಜನಸಂಖ್ಯಾ ಲಾಭಾಂಶ) ವನ್ನು ಆರ್ಥಿಕವಾಗಿ ಲಾಭವಾಗಿ ಪರಿವರ್ತಿಸಲು ಹೆಣಗಾಡುತ್ತಿದೆ ಎಂದು ವಿವರಿಸುತ್ತಾರೆ. ಏಕೆಂದರೆ ಕೃಷಿ ಕ್ಷೇತ್ರದ ಹೊರಗೆ ಸೀಮಿತ ಉದ್ಯೋಗ ಸೃಷ್ಟಿ ಮತ್ತು ಯುವಕರ ಆಕಾಂಕ್ಷೆಗಳು ಮತ್ತು ಲಭ್ಯವಿರುವ ಅವಕಾಶಗಳ ನಡುವೆ ನಿರಂತರ ಅಂತರ ಕಂಡುಬರುತ್ತಿದೆ. ಈ ಸಂಚಿಕೆಯು ಆಂತರಿಕ ವಲಸೆ, ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಜಾತಿ-ಆಧಾರಿತ ಔದ್ಯೋಗಿಕ ಪ್ರತ್ಯೇಕತೆಯ ನಿಧಾನಗತಿಯ ಸಡಿಲಗೊಳಿಸುವಿಕೆ ಮುಂತಾದ ವಿಷಯಗಳನ್ನೂ ಸಹ ಪರಿಶೋಧಿಸುತ್ತದೆ.